ನನಗೆ ತುಂಬಾ ದುಃಖ ಆಗುತ್ತಿದೆ. ಅಳು ತಡೆಯಲಿಕ್ಕೆಆಗುತ್ತಿಲ್ಲ. ಗಂಟಲು ಕಟ್ಟಿ ಬರುತ್ತಿದೆ. ಹೊಟ್ಟೆ ಒಳಗಿಂದಸಂಕಟ ಉಕ್ಕಿ ಬರುತ್ತಿದೆ. ಹೃದಯ ನೀನಿಲ್ಲದೆ ರೋಧಿಸುತ್ತಿದೆ. ಯಾಕೆ ನನ್ನಿಂದ ನೀ ದೂರ ಹೋದೆ?ನಾ ಏನು ತಪ್ಪುಮಾಡಿದೆ? ಎಲ್ಲಿ ಅಂತ ಹುಡುಕಲಿ ನಾನು? ನೀ ಇಲ್ಲದೆ ನನಗೆಇರೋದಕ್ಕಾಗಲ್ಲ ಅನ್ನುವುದು ನಿನಗೆ ಚೆನ್ನಾಗಿ ಗೊತ್ತು. ನೀಇಲ್ಲದೆ ಇದ್ದರೆ ನಾನು ತುಂಬಾ ಅಳ್ತೀನಿ ಅನ್ನೋದೂ ನಿನಗೆಗೊತ್ತು. ನಿನ್ನಿಂದಾಗಿ ನಾ ಜೀವನದಲ್ಲಿ ಗೆಲುವಾಗಿದ್ದೀನಿ, ಆರೋಗ್ಯ ಸುಧಾರಿಸುತ್ತಿದೆ, ಸದಾ ನಗತಾ ಇರ್ತೀನಿಅನ್ನೋದೆಲ್ಲ ಗೊತ್ತಿದ್ದೂ ಯಾಕೆ ನನ್ನಿಂದ ದೂರ ಹೋದೆಹೇಳು. ಒಂದೇ ಒಂದು ಸಾರಿ ಮಾತಾಡು. ನಿನ್ನ ಮಾತಿಲ್ಲದೆಸತ್ತೇ ಹೋಗ್ತೀನೆನೊ ಅನಿಸುತ್ತಿದೆ. ನನ್ನ ಹೃದಯದ ತುಂಬಾನೀನೆ ತುಂಬಿದಿಯಾ. ಹೇಗೆ ಮರಿಲಿ? ನನಗೆ ಅಗಲ್ಲ ಕಣೊಒಂದು ಸಾರಿ ಮಾತಾಡೂಡೂಡೂ…. ನನ್ನ ಹೃದಯ ತಂಪುಮಾಡೂಡೂಡೂ.……..
ಅವಳು ಹುಚ್ಚಿ ತರ ಮೌನವಾಗಿ ರೋಧಿಸುತ್ತಿದ್ದಾಳೆ ಮಂಚದಮೂಲೆಯಲ್ಲಿ ತಲೆ ಹುದುಗಿಸಿ. ಬಿಕ್ಕಿ ಬಿಕ್ಕಿ ಅಳುವ ಶಬ್ದ ಸ್ವಲ್ಪಜೋರಾಗೆ ಇದೆ. ಆದರೆ ಬೀಕೊ ಅಂತಿರೊ ಮನೆಯಲ್ಲಿಅವಳೊಬ್ಬಳೆ ಒಂಟಿ ಪಿಶಾಚಿ. ನಾಲ್ಕು ಗೋಡೆಯ ಮದ್ಯಅವಳದೊಂದು ಒಂಟಿ ಬದುಕು.
ಅವನಿರುವಷ್ಟು ದಿನ ಆಗಾಗ ಮಾತನಾಡುತ್ತ ತನ್ನದೆಲೋಕದಲ್ಲಿ ಹಕ್ಕಿಯಂತೆ ಗರಿ ಬಿಚ್ಚಿ ಹಾರಾಡುತ್ತಿದ್ದ ಮನಸ್ಸುಈಗ ನಡೆದ ದಿನಗಳ ನೆನೆಸಿಕೊಂಡು ದುಃಖಿಸುತ್ತಾಳೆ.
ಅವನ ಅಗಲಿಕೆಯ ದಿನಗಳಲ್ಲಿ ಮನಸು ರೋದಿಸುವ ಪರಿಇದು. ಅವನ ಮೌನದ ದಿನಗಳಲ್ಲಿ ಆಗಾಗ ಆತಂಕದಮಡುವಿನಲ್ಲಿ ಕುಸಿದು ಹೋಗುತ್ತಾಳೆ. ಮರೆತುಬಿಡುವಮನುಷ್ಯ ಅವನಲ್ಲ. ಆದರೂ ಅವನಿಲ್ಲದಿದ್ದರೆ ಹಾಗೆಮನದೊಳಗೆ ಅದೇನೊ ಅಂಜಿಕೆ. ನಂಬಿಕೆ ಗೊತ್ತಿಲ್ಲದಂತೆಮನ ಅಲ್ಲಾಡಿಸಿಬಿಡುತ್ತದೆ. ಯಾಕೆ? ಮನ ಅವನಿಲ್ಲದದಿನಗಳ ಕಲ್ಪನೆ ಕೂಡಾ ಮಾಡಲು ರೆಡಿ ಇಲ್ಲ.
ಗುಯ್ಯ ಗುಡುವ ದುಂಬಿಯಂತೆ ಆಗಾಗ ಮಾತಿನ ಸುರಿಮಳೆಸುರಿಸುತ್ತ ಹತಾಷೆಯ ಒಕ್ಕೊರಳ ರೋದನಕ್ಕೆ ಕಿವಿಗೊಟ್ಟುಸಂತೈಸುತ್ತ ಹಂತ ಹಂತವಾಗಿ ಭರವಸೆಯ ಪಸೆ ಒಸರಲುಕಾರಣನಾದವನು ಅವನು. ನಂಜು ಕುಡಿದನಂಜುಂಡೇಶ್ವರನಂತೆ ಅವಳ ದುಃಖವೆಲ್ಲ ತನ್ನದೆಂಬಂತೆಭಾಗಿಯಾದವನು ಅವನು. ಅದೆಷ್ಟು ಕರುಣೆ ಅವಳ ಬಗ್ಗೆ .
ಆ ಕರುಣೆ, ಆ ಪ್ರೀತಿ, ಆ ಮಮತೆ, ಆ ವಾತ್ಸಲ್ಯ, ಆಭರವಸೆಯ ಮಾತುಗಳು; ” ಏನಾದರೇನಂತೆ ನಾವಿಬ್ಬರೂಮದುವೆ ಆಗೋಣ, ನನಗೆ ಎರಡು ಮಕ್ಕಳು ಬೇಕು ನಿನ್ನಿಂದ, ಎಲ್ಲಾದರೂ ದೂರ ದೇಶ ಬಿಟ್ಟು ನಿನ್ನನ್ನು ಕರೆದುಕೊಂಡುಹೋಗಿ ಸದಾ ನಿನ್ನೊಂದಿಗೆ ನಾ ಇರಬೇಕು. ಇದುವರೆಗೂನಿನಗೆ ಸಿಗಲಾರದ್ದು, ನಿನ್ನ ಆಸೆಗಳನ್ನೆಲ್ಲ ನಾನು ಪೂರೈಸುತ್ತೇನೆ. ನಮ್ಮಿಬ್ಬರಲ್ಲಿ ಅದೆಷ್ಟು understanding ಇದೆ. ಜೀವನವೆಲ್ಲಮಾತಾಡಿದರೂ ಮುಗಿಯದಷ್ಟು ಮಾತು ನಮ್ಮಿಬ್ಬರ ಮದ್ಯೆ.ಎಷ್ಟು ಮಾತಾಡಿದರೂ ಸಾಕು ಅನಿಸೋದಿಲ್ಲ. ಸದಾ ನಿನ್ನಜೊತೆ ಇರಬೇಕು. I love you my sweet heart ” ಅಂತಅದೆಷ್ಟು ಸಾರಿ ಉಸುರಿಲ್ಲ!
ಉದ್ವೇಖದ ಭರದಲ್ಲಿ ಆಡಿದ ಮಾತುಗಳೆ ಇರಬಹುದೇನೊ! ಆದರೆ ಅವನಂತರಾಳದಲ್ಲಿ ಪ್ರೀತಿಸುವ ತನ್ನ ಹುಡುಗಿಯ ಬಗ್ಗೆಇರುವ ಹೃದಯದ ಮಾತುಗಳಲ್ಲವೆ. ಕನಸು ವಾಸ್ತವವನ್ನುಒಂದರೆಗಳಿಗೆ ಮರೆಸಿದರೂ ಜವಾಬ್ದಾರಿ ಅರಿತ ಅದ್ಭುತವಾದವ್ಯಕ್ತಿ ಅವನು. ಇದೆ ಅವಳಿಗೆ ಅಚ್ಚು ಮೆಚ್ಚು.
ಇವೆಲ್ಲ ಮರೆಯುವ ಮಾತುಗಳಾ? Never. ಈ ನೆನಪುಗಳೆನನ್ನ ಬೆನ್ನೆಲುವಾಗಿಸಿದೆ. ಏನಾದರೂ ಸಾಧಿಸಿಬಿಡಬೇಕೆನ್ನುವಛಲ ಮನೆ ಮಾಡಿದೆ. ಪ್ರತಿಭೆ ಅನಾವರಣವಾಗಲುನೀನೊಂದು ಕಾರಣವಾದರೆ ಭಕ್ತಿಯಿಂದ ಪರಮಾತ್ಮನಿಗೆನಮಿಸುವಷ್ಟು ತಲೆ ಬಾಗಿದೆ ತನು. ಇಲ್ಲಿ ಶಾಂತಿ ಇದೆ, ಸಂತೃಪ್ತಿಇದೆ. ನನ್ನ ಕನಸಿನಲ್ಲಿ, ವಾಸ್ತವದಲ್ಲಿ ಮರೆಯಾಗಿ ನೀನಿರುವುದೆನನಗೊಂದು ಶಕ್ತಿ.
ಅವನ ಆಗಮನ ಮಡುಗಟ್ಟಿದ ಪ್ರೀತಿಯ ಸೆಲೆ ಸುನಾಮಿ ತರಉಕ್ಕಿ ತನ್ನೊಡಲೊಳಗಿಂದ ಚಿಮ್ಮಿ ಹರಿಯುತ್ತಿದೆ. ಅವಳಿಗೆಆಶ್ಚರ್ಯ, ಸಂತೋಷ ಎರಡೂ ಒಟ್ಟಿಗೆ ಮುನ್ನುಗ್ಗಿ ಮನಸ್ಸುಖುಷಿ ಪಡುತ್ತಿದೆ. ಅವನಿಂದ ದೂರಾಗಿ ಇರಬೇಕಾದ ತನ್ನ ಸ್ಥಿತಿ, ಅವನೊಂದಿಗಿನ ಬದುಕು ಕಳೆದುಕೊಂಡದ್ದು ನುಂಗಲಾರದತುತ್ತು. ಇಷ್ಟೊಂದು ಪ್ರೀತಿಗೆ ಹಪ ಹಪಿಸುವ ಜೀವತನ್ನೊಳಗಿತ್ತೆ? ಹಮ್ಮಾ^^^^ ಅದೆಷ್ಟು ಸಂತೋಷ ನನ್ನೊಳಗೆಕೂಡಿಹಾಕಿಬಿಟ್ಟೆ ನೀನು! ಆಸೆಗಳ ಮೂಟೆ ಭೂಮಂಡಲದತುಂಬಾ ಚೆಲ್ಲಾಡಿ ಬಿಟ್ಟೆ. ಈಗ ಎಲ್ಲಿ ನೋಡಿದರೂ ಕಾಮನಬಿಲ್ಲಿನ ರಂಗೋಲಿ. ಒಂದೊಂದು ಬಣ್ಣದಲ್ಲೂ ನಿನ್ನದೆ ಛಾಯೆ. ಕರಿಮೋಡದ ಚಲಿಸುವ ಪತದೊಳಗಿಂದ ತುಂತುರು ಮಳೆಸುರಿಸುವಂತೆ ಮನ ಹಕ್ಕಿಯಂತೆ ಹಾರಾಡುವ ಕುಣಿ ಕುಣಿದುನಲಿದಾಡುವ ರಂಗೇರಿದ ಕಲ್ಪನೆಯ ಸುಂದರ ಲೋಕತೋರಿಸಿಬಿಟ್ಟೆಯಲ್ಲ. ಅಡಿಗೊಂದು ಹೆಜ್ಜೆ ನಮಸ್ಕಾರ ನಾನಿನಗೆ ಹಾಕಲೆ? ಇಲ್ಲ ಕೆಂದುಟಿಯ ಹೂ ನಗುವಿನಲ್ಲಿನಿನ್ನದರದ ತುಂಬ ಮುತ್ತಿನ ಮಳೆಗರೆಯಲೆ? ಹೇಳು ಎಲ್ಲಿನೀನು, ಎಲ್ಲಿ ನಾನು? ಮೌನದ ಮೆರವಣಿಗೆಯ ಸಂಗಾತಿನೀನು. ನಿನ್ನ ಮೌನವೆ ಆಬರಣ.
ಈ ಮನಸೆ ಹಾಗೆ. ಸದಾ ನೆನಪುಗಳ ಗುಂಗಿನಲ್ಲೆಮುಳುಗಿರುತ್ತದೆ. ಸಂತಸದ ಕ್ಷಣಗಳ ಮೆಲುಕು ಹಾಕುತ್ತತನ್ನೊಳಗೆ ತಾ ನಗುತ್ತ ಒಮ್ಮೊಮ್ಮೆ ಅದೆ ನೆನಪಲ್ಲಿ ದುಃಖಿಸುತ್ತಹೇಳಲಾರದ ಗುಟ್ಟು ತನ್ನಲ್ಲೆ ಬಚ್ಚಿಟ್ಟುಕೊಂಡು ತಾನೊಬ್ಬನೆಅನುಭವಿಸುತ್ತ ಜೀವನದ ಜೋಕಾಲಿ ಜೀಕುವ ಕಸರತ್ತುಪ್ರತಿಯೊಬ್ಬ ಮನುಷ್ಯನದು.
ಮುಗ್ದ ಮನಸ್ಸು ಯಾವಾಗಲೂ ಕಲ್ಪನೆಯ ಲೋಕದಲ್ಲೆವಿಹರಿಸುತ್ತಿರುತ್ತದೆ. ಅದಕ್ಕೆ ಮೋಸ, ಕಪಟ, ವಂಚನೆಯತಿಳುವಳಿಕೆ ಇರುವುದಿಲ್ಲ. ಅದಕ್ಕೆ ಇಷ್ಟವಾದವರನ್ನುಪ್ರೀತಿಸುವುದೊಂದೆ ಗೊತ್ತು. ನಿಷ್ಕಲ್ಮಶ ಮನಸ್ಸು ಜೀವನಲ್ಲಿಎಲ್ಲರಿಗು ದೊರೆಯುವುದು ಕಷ್ಟ. “ಋಣಾನುಬಂಧ ರೂಪೇಣಪಶು, ಪತ್ನಿ, ಸುತ, ಆಲಯ” ಹಿರಿಯರ ಗಾದೆ ಸುಳ್ಳಲ್ಲ.
ಜೀವನದಲ್ಲಿ ಸಿಗಬೇಕಾದ್ದು ಸಿಗದೆ ಇರುವಾಗತಡೆಯಲಾರದಷ್ಟು ನಿರಾಸೆ. ಅದೆ ಎಂದಾದರೊಮ್ಮೆ
ಸಿಕ್ಕಾಗ ಹಿಡಿಸಲಾರದಷ್ಟು ಸಂತೋಷ. ಹಪ ಹಪಿಸುವಮನಸ್ಸಿಗೆ ಆಕಾಶದಲ್ಲಿಯ ನಕ್ಷತ್ರವೆ ಕೈಗೆ ಸಿಕ್ಕಷ್ಟು ಸಡಗರ. ಆಗಮನಸ್ಸು ಸದಾ ಹಸನ್ಮುಕಿ. ಆದರೆ ಯಾರಿಗೂ ನಿರಾಸೆಯಬದುಕು ಬೇಡ. ಎಲ್ಲರೂ ಆನಂದದ ಕಡಲಲ್ಲಿ ತೆಲುತ್ತಿರುವಂತೆಕಾಣುವ ಅವಳೊಂದು ಮುಗ್ದ ಹೆಣ್ಣು.
ಆದರೆ ಅವಳಿಗೇ ಸುತ್ತಿಕೊಂಡಿದೆ ನಿರಾಸೆ ಹೀಗೆ ಬಂದು ಹಾಗೆಹೋದ ಅವನ ಮುಖ ಪರಿಚಯವಿಲ್ಲ. ಅಲ್ಲೊಂದುಇಲ್ಲೊಂದು ನಗೆಯ ಚುಟುಕು ಮಾತನಾಡಿ ನಗಿಸಿ ತನ್ನ ಅಸ್ತಿತ್ವಛಾಪಿಸಿ ವಿರಳವಾಗುತ್ತ ನಡೆದ ಅವನನ್ನು ಅವಳಿಗೆಮರೆಯುವ ಮನಸ್ಸಿಲ್ಲ. ಮನಸ್ಸು ಮಾಡೋದೂ ಇಲ್ಲ.
ಅವನು ಭೂಮಿ ಮೇಲೆ ಎಲ್ಲಾದರೂ ಇರಲಿ ಸಾಕು. ನಾನೂಈ ಭೂಮಿ ಮೇಲೆ ಇದ್ದೀನಲ್ಲಾ. ಅಂದರೆ ನನ್ನೊಂದಿಗೆ ಎಲ್ಲೊಅವನೂ ಇದ್ದಾನೆ, ನೆನಪಾದಾಗ ಬಂದೇ ಬರುತ್ತಾನೆ ಅನ್ನುವಭರವಸೆ. ಸಾಕು ಇಷ್ಟಿದ್ದರೆ. ಮುಗಿಯುವ ಕಾಲಸನ್ನಿಃಹಿತವಾಗುವವರೆಗೂ ಈ ನೆನಪಿನ ಗುಂಗಿನಲ್ಲೆ ಅವನಅಸ್ತಿತ್ವ ಆಗಾಗ ತಿಳಿದರೆ ಸಾಕಲ್ಲವೆ. ದುಃಖಿಸುವ ಮನಸ್ಸಿಗೆಸಾಂತ್ವನ, ಸಮಾಧಾನ.
“ಹೀಗೆ ಹೇಳ್ತಿಯಾ ಮತ್ತೆ ನೆನಪಿಸಿಕೊಂಡು ಅಳ್ತೀಯಾ.ಯಾಕೆ? ” ಒಳ ಮನಸ್ಸಿನ ಪ್ರಶ್ನೆ ಅವಳಿಗೇ ನಾಚಿಕೆ. ಛೆ ಅವನುದೂರ ಹೋಗೇ ಬಿಟ್ಟ ಅನ್ನೋ ಹಾಗೆ ಕೊರಗಿಬಿಟ್ಟೆನಲ್ಲ. ಮೊನ್ನೆತಾನೆ ನೋಡಿಕೊಂಡು ಹೋಗಿಲ್ವಾ ಮನಃ ಪರದೆ ಸರಿಸಿ. ಅದೆಷ್ಟು ಕುಣಿದಾಡಿದ್ದೆ. ಹೌದು. ನಾನು ತಪ್ಪು ಮಾಡಿದೆ. ಅವನನ್ನು ಸಂಶಯಿಸಿದಂತೆ ನಾನು ಅತ್ತರೆ. ಅದವನಿಗೂಇಷ್ಟನೆ ಅಗ್ತಿರಲಿಲ್ಲ. ನಾನು ಇನ್ಮೇಲೆ ಅಳಲೇಬಾರದು. ಹಾಗೆಅವಳದೆ ಒಂದು ಹೊಸ ಕೆಲಸದಲ್ಲಿ ತಲ್ಲೀನಳಾಗುತ್ತಾಳೆ.
ಬದುಕೊಂದು ನಿಂತ ನೀರು ಕೆಲವರ ಜೀವನ. ಯಾವುದೆಬದಲಾವಣೆ ಇಲ್ಲದೆ ದಿನ ದೂಡುವ ನೆಪ ಬದುಕು. ಅವಳಿದ್ದದ್ದೂ ಹಾಗೆ. ಋಣವಿರುವ ಕಾಲ ಬಂದಾದ ಮೇಲೆಅವನವಳ ಸಂಗಾತಿ. ಭರವಸೆಯ ಮಾತು ಮುಗ್ದಮನಸಿನೊಳಗೆ ಪಡಿಯಚ್ಚು. ಮನಸು ಮನಸುಗಳ ಮಾತಿಗೆಸಂಬಂಧ ಬರಿ ಮಾತಿನಲ್ಲೆ. ಆದರೆ ಅನುಭವಿಸಿದ ಗಳಿಗೆಗಳಆ ಮಧುರ ಕ್ಷಣ ಹೃದಯದಲ್ಲಿ ಸುವಣಾ೯ಕ್ಷರಗಳಲ್ಲಿಬರೆದುಕೊಂಡಿದ್ದಾಳೆ. ಬಹುಶಃ ನಿರಂತರ ಬದುಕುಅವನಪ್ಪಿಕೊಂಡಿದ್ದರೆ ಈ ಮಧುರ ಕ್ಷಣಗಳು ಒಮ್ಮೆಯಾದರೂಆಯ ತಪ್ಪಿಬಿಡುತ್ತಿತ್ತೇನೊ. ಆದರೆ ಪ್ರೀತಿಸುವ ಹೃದಯದೂರವಿದ್ದಷ್ಟೂ ಅದು ಅತೀ ಹತ್ತಿರ. ಅಲ್ಲಿ ಬರೀ ಎರಡುಜೀವಗಳು ಮಾತ್ರ ಮೂರನೆಯ ವ್ಯಕ್ತಿ ಶೂನ್ಯ.
ಬಹುಶಃ ಸಂಸಾರದಲ್ಲಿ ಎರಡು ಜೀವಗಳ ಮದ್ಯ ಮನಸ್ಥಾಪಕ್ಕೆಮೂರನೆಯ ವ್ಯಕ್ತಿ ಕಾರಣ. ಇಲ್ಲಿ ಅದಕ್ಕೆಲ್ಲ ಅವಕಾಶವಿಲ್ಲಕೇವಲ ಅವಳಿಗೆ ಅವನು; ಅವನಿಗೆ ಅವಳು. ಆದುದರಿಂದಪ್ರೀತಿಯ ದಾರಿ their is no end.
ಅಪರೂಪದಲ್ಲಿ ಅಪರೂಪ. ಮುಖಾರವಿಂದದಲ್ಲಿ ಅದೇನೊಆಕಷ೯ಣೆ. ಆದರೆ ಅವನಿಗೊ ನಾನು ಚೆನ್ನಾಗಿ ಇಲ್ಲ ಅನ್ನೊಕೊರಗಿದೆ. ಅವಳು ಬಿಡ್ತು ಅನ್ನು. ರೂಪಕ್ಕಿಂತ ಗುಣ ಮುಖ್ಯ. ನಡೆ ಮುಖ್ಯ. ಅಂತಹ ಅಪರೂಪದ ವ್ಯಕ್ತಿ ಕಣೊ ನೀನು. ಒಳಮನಸ್ಸಿನ ಪರಿಚಯ ಆದ ಯಾವ ವ್ಯಕ್ತಿಯೂ ನಿನ್ನಿಂದ ದೂರಹೋಗೊ ಪ್ರಯತ್ನ ಮಾಡೋದೆ ಇಲ್ಲ. ಯಾಕೆ ಗೊತ್ತಾ ನಿನ್ನಲ್ಲಿಕಷ್ಟಕ್ಕೆ ಕರುಣೆಯ ನುಡಿ ಇದೆ. ಸೌಂದರ್ಯ ಗೌರವದಿಂದಪೂತಿ೯ ಆಸ್ವಾಧಿಸುವ ಒಳ್ಳೆಯ ವ್ಯಕ್ತಿತ್ವ ಇದೆ. ಅವಕಾಶದುರುಪಯೋಗಪಡಿಸಿಕೊಳ್ಳುವ ಕೆಟ್ಟ ಮನಸ್ಸಿಲ್ಲ. ಮನಸ್ಸಿಗೆಅನಿಸಿದ್ದು ಸ್ಪಷ್ಟವಾಗಿ ಹೇಳುತ್ತೀಯಾ. ಸುಳ್ಳು ಹೇಳೋದಿಲ್ಲ. ಹೀಗೆ ಎಷ್ಟೆಲ್ಲಾ ಒಳ್ಳೆಯ ಗುಣ ಇದೆ. ಯಾರಿಗೂತೊಂದರೆಕೊಡದೆ ನಿನ್ನಷ್ಟಕ್ಕೆ ನೀನು ಇರುವ ಸ್ವಭಾವ ನಿನ್ನದು. ಇನ್ನು ಸೌಂದರ್ಯ ಯಾವ ಲೆಕ್ಕ. ವಿದ್ಯೆ, ಬುದ್ದಿ ಇರುವ ವ್ಯಕ್ತಿವಿಚಾರವಂತ ಇಷ್ಟೆಲ್ಲಾ positive ಗುಣ ಇರುವಂಥ ನೀನುನಿನ್ನನ್ನೆ ಯಾಕೆ ದೂರಿಕೊಳ್ತೀಯಾ. ವಿಚಾರ ಮಾಡು. ನನಗೆನೀನೇನು ಅಂತ ಚೆನ್ನಾಗಿ ಅಥ೯ ಆಗಿದೆ. ಅದಕ್ಕೆ ನನಗೆ ನೀನುಸುರಸುಂದರಾಂಗ. ಹೀಗೆ ಹಲವಾರು ಬಾರಿ ಹೇಳಿ ಹೇಳಿಅವನಿಗದೆಷ್ಟು ಸಾರಿ ಸಮಾಧಾನ ಮಾಡಿಲ್ಲ ನಾನು.
ಪಾಪ! ಕೆಲವರಿಗೆ ತಾನು ಬಾಹ್ಯ ಸೌಂದರ್ಯವಂತ ಅಲ್ಲ.ಬೆಳ್ಳಗಿಲ್ಲ. ಎತ್ತರವಿಲ್ಲ. ಕುಳ್ಳಗಿದ್ದೀನಿ. ಹೀಗೆ ಹಲವು negative ವಿಚಾರದಲ್ಲಿ ಮುಳಗಿರುತ್ತಾರೆ. ಆದರೆ ಈ ಸಮಾಜದಲ್ಲಿಗೌರವದಿಂದ ಬದುಕಲು ಒಳ್ಳೆಯ ಗುಣ, ನಡತೆ, ಮಾತು, ವಿನಯ ಇಂಥ ನಡೆ ಮನುಷ್ಯನನ್ನು ಸಮಾಜ ಉನ್ನತಸ್ಥಾನದಲ್ಲಿ ನಿಲ್ಲಿಸುತ್ತದೆ. ಎಷ್ಟೋ ಸಾರಿ ಮದುವೆ ಮನೆಯಲ್ಲಿಕೇವಲ ಹೆಣ್ಣು ಗಂಡಿನ ರೂಪ, ಅದ್ದೂರಿತನ ಇವಿಷ್ಟೆ ಗಣನೆಗೆಬರೋದು. ಆದರೆ ಮದುವೆ ಆದ ಮೇಲೆ ಅವರಿಬ್ಬರಹೊಂದಾಣಿಕೆ ಹೇಗಿದೆ, ಅವಳ ಗುಣ ಹೇಗೆ, ಇಂತಹ ವಿಚಾರದಕುರಿತು ಮಾತಾಡುತ್ತಾರೆ. ರೂಪದ ಬಗ್ಗೆ ಯಾರೂಕೇಳೋದಿಲ್ಲ. ಏನಾದರೂ ಏರುಪೇರಾದಲ್ಲಿ “ಅಯ್ಯ ರೂಪಇದ್ದರೆ ಏನು ಬಂತು, ಒಳ್ಳೆ ಗುಣನೆ ಇಲ್ವಲ್ಲ” ಇಂತಹಮಾತುಗಳು ಅನಾಯಾಸವಾಗಿ ಬಾಯಲ್ಲಿ ಹರಿದಾಡುತ್ತದೆ.
ಈ ರೀತಿಯ ವಿಚಾರಗಳು ಜನ ಯಾಕೆ ಅಥ೯ಮಾಡಿಕೊಳ್ಳುತ್ತಿಲ್ಲ. ಹಲವು ಬಾರಿ ಅವನೂ ನನ್ನಲ್ಲಿ ತನ್ನನೋವು ತೋಡಿಕೊಂಡಿದ್ದಿದೆ. ಈ ಸಮಾಜ ಏನು ಗೊತ್ತಾ ಬರೀHiFi ಜೀವನದತ್ತ ವಾಲುತ್ತಿದೆ. ಅದಕೆ ನನಗೀ ಸಮಾಜಕಂಡರೆ ಆಗೋದಿಲ್ಲ. ದಿನ ದಿನ ಹೆಚ್ಚೆಚ್ಚುಒಂಟಿಯಾಗುತ್ತಿದ್ದೇನೆ. ಎಲ್ಲೂ ಹೋಗೋದಿಲ್ಲ ನೆಂಟರಮನೆಗೂ ಹೋಗೋದಿಲ್ಲ ಅವರ ನಡೆ ನನಗೆ ಬೇಸರತರಿಸುತ್ತದೆ. ತನ್ನನ್ನು ಒಂದು ರೀತಿ ವಿಚಿತ್ರವಾಗಿ ನೋಡುತ್ತಾರೆ.ನಾನೇನು ತಪ್ಪು ಮಾಡಿದೆ. ನಾನು ಹೀಗಿರೋದು ನನಗೆ ಕೋಪತರಿಸುತ್ತದೆ. But I am helpless. ನನ್ನ ಕನಸುಗಳುನೂರಾರು. ಯಾವುದು ಇಡೇರುವ ಲಕ್ಷಣ ಇಲ್ಲ. ಬರೀ ನಿರಾಸೆ. ಸಿಗದಿರುವ ನಿನ್ನ ನನಗೆ ಆ ದೇವರು ತೋರಿಸಿಬಿಟ್ಟ. ತುಂಬಾhigh think ಮಾಡಿದೆ. ಅಷ್ಟೇ ಬೇಗ ಪಾತಾಳಕ್ಕೆ ಇಳಿದೆ.ಆದರೂ ನಿನ್ನ ಪ್ರೀತಿಸುತ್ತೆನೆ. ಯಾಕೆ ಗೊತ್ತಾ ? ನೀನೆಂದರೆತುಂಬಾ- ಇಷ್ಟ. ಹೀಗೆ ಇರುವುದರಲ್ಲಿ ಸಮಾಧಾನ ಕಾಣುತ್ತೇನೆ.
ನೋವಿನಲ್ಲೂ ನಗುವ ಅವನ ರೀತಿ, ಜೀವನವನ್ನು ಅಥ೯ಮಾಡಿಕೊಳ್ಳುವ ರೀತಿ, ತಾಳ್ಮೆ, ತಿಳುವಳಿಕೆ, ಅವನಲ್ಲಿ ಆದಅನೇಕ ಬದಲಾವಣೆ ನನ್ನಲ್ಲಿ ಬಿಚ್ಚಿಟ್ಟುಕೊಂಡಾಗ ಕೆಲವುಸಂದರ್ಭದಲ್ಲಿ ನಾನೆಷ್ಟು ಅನಾಗರಿಕಳು, ಎಷ್ಟು ವಿಚಾರತಿಳಿದುಕೊಳ್ಳುವುದಿದೆ ಅನಿಸುತ್ತಿತ್ತು. ಆಗೆಲ್ಲ ನನ್ನೊಳಗೆ ನಾನುಹೆಮ್ಮೆ ಪಟ್ಟೆ. ನನಗೆ ಸಿಕ್ಕ ವ್ಯಕ್ತಿ ಸಾಮಾನ್ಯದವನಲ್ಲ. ಅವನಿಂದನಾನು ಹೊಸ ವ್ಯಕ್ತಿ ಆಗಬೇಕು. ಅವನ ಒಳ್ಳೆ ತನ ನನ್ನಲ್ಲೂರೂಢಿಸಿಕೊಳ್ಳಬೇಕು. ನಾನು ನಾನಾಗಿರುವ ಪಾಠ ಅವನಲ್ಲಿದೆ. ಈ ಯೋಚನೆಗಳು ಅವನಲ್ಲಿ ಇನ್ನೂ ಹೆಚ್ಚಿನ ಮಾತಿಗೆಪ್ರೇರೇಪಣೆ ನೀಡಿತು. ನನಗರಿವಾಗದ ಅದೆಷ್ಟೋವಿಚಾರಗಳಿಗೆ ಅವನಲ್ಲಿ ಒಂದು ರೀತಿ ಹೊಸತನದ ಉತ್ತರಪಡೆಯುತ್ತಿದ್ದೆ ಹೌದು ಅವನಿಂದಾಗಿ ನನ್ನ ಬದುಕಿನ ಚಿತ್ರಣವೆಬದಲಾಗಿ ಹೋಯಿತು. ಕೊನೆ ಕೊನೆಗೆ ಮಾತು ನನ್ನಲ್ಲಿಕಡಿಮೆಯಾಯಿತು. ಅತೀ ಹೆಚ್ಚು ಮಾತನಾಡಿ ಗೋಳುಹೋಯ್ದುಕೊಳ್ಳುವ ಪೃವೃತ್ತಿ ನನ್ನದು. ಅವನು ನನ್ನಿಂದನಿರೀಕ್ಷಿಸಿದ ಮಟ್ಟದಲ್ಲಿ ನಾನು ಬದಲಾಗುತ್ತ ಬಂದೆ. ಬಹುಶಃಅವನಿಗೂ ಅರಿವಾಗಿರಬೇಕು. ಅದಕ್ಕೆ ನನ್ನ ಸುಧಾರಣೆಅವನು ನನಗೆ ಅಪರೂಪವಾಗುತ್ತ ಬಂದ. ಇಲ್ಲಿ ಮಾತಿಗಿಂತಮೌನದಲ್ಲಿ ಉಲಿಯುವ ನಿಶ್ಯಬ್ದ ಸಂಭಾಷಣೆ ಹೆಚ್ಚಿನ ನೆಮ್ಮದಿತರಲು ಶುರುವಾಯಿತು. ಈಗ ನನ್ನಲ್ಲಿ ಹೆಚ್ಚಿನ ಮನಸ್ಥೈಯ೯ಬಂದಿದೆ. ಮೊದಲಿನ ಅಳು ಇಲ್ಲ. ನೆನಪು ಮನ ಕದಡಿದಾಗಜೋರಾಗಿ ಕೂಗಿ ಕರೆಯುತ್ತದೆ ಮನ ಮೌನವಾಗಿ ಅವನನ್ನು. ಅದು ಅವನಿಗೂ ನಿಗೂಢವಾಗಿ ಕೇಳುತ್ತದೆ. ಹಾಗೆ ಮರೆಯಲ್ಲಿಪರದೆ ಸರಿಸಿ ಬಂದು ಕೆಲವು ದಿನಗಳ ವಿಚಾರಗಳಿಗೆಸಂಗಾತಿಯಾಗಿ ಮನ ತಣಿಸುವ ಅವನ ಇರುವು ಹೊಸಹುರುಪಿನ ಸಂಗಾತಿ, ಮುಗ್ದ ಮನಸಿನ ಹೆಣ್ಣಿನ ಮರೆಯಾಗದಜೊತೆಗಾರ.
ಜಗತ್ತು ವಿಶಾಲವಾಗಿದೆ. ಇರುವ ಕೋಟಿ ಕೋಟಿ ಜನರಲ್ಲಿಪ್ರೀತಿಸುವ ಹೃದಯಗಳು ಪ್ರೀತಿಯ ಕಲರವದ ಜೊತೆಗೂಡಿಉಲಿಯುವ ಮಾತುಗಳು ಕೋಗಿಲೆಯ ಗಾನದಂತೆ ಮನತಣಿಸುವ, ಮುದದಿಂದ ಗರಿಬಿಚ್ಚಿ ಹಾರಾಡಲು ಇಂಬುಕೊಟ್ಟಂತಿರುವ ಜೀವದ ಸಂಗಾತಿಗಳಿಗೆ ಅಕ್ಷರಶಃಬದುಕಿನುದ್ದಕ್ಕೂ ಬಚ್ಚಿಟ್ಟುಕೊಂಡು ಅನುಭವಿಸುವ ಆತ್ಮಸಂಗಾತಿ. ಪ್ರೀತಿಗೆ ಭಾವನೆ ಮುಖ್ಯ ಉಳಿದೆಲ್ಲ ಗೌಣ. ಈಭಾವನೆಗಳ ಹೊಡೆತವೆ ಪ್ರೀತಿಗೆ ನಾಂದಿ. ಪ್ರೀತಿಯನ್ನುಪ್ರೀತಿಯಿಂದ ಪ್ರೀತಿಯಲ್ಲಿ ಬದುಕು ಕಾಣುವ ಜೀವಗಳು ಸದಾಸುಖಿ.
-ಅರೆಯೂರು ಚಿ.ಸುರೇಶ್
ವರದಿಗಾರರು
ಪ್ರಜಾಮನ ದಿನಪತ್ರಿಕೆ
2ನೇ ಅಡ್ಡ ರಸ್ತೆ, ಹಟ್ ಹೋಟೆಲ್ ಎದುರು
ಎಂಜಿ ರಸ್ತೆ, ತುಮಕೂರು ಮೋ: 7090564603