ಮನಸ್ಸು
ಮನಸ್ಸಿನ ಗೂಡೊಳು
ಅವಿತ ಪಂಚರಂಗಿ ಬಣ್ಣ
ಬೇಡ ಬೇಡಾ ಅಂದರೂ
ತನ್ನಿಶ್ಚೆಯಂತೆ ಜಾಲಾಡಿ
ನಡೆಯಲು ಹಾತೊರೆಯುತ್ತಿರುವಾಗ
ಬಯಕೆಗಳ ಮೂಟೆ ಹೊತ್ತ ಮನುಷ್ಯ
ಕಡ್ಡಿ ತುಂಡು ಮಾಡಿದಂತೆ
ಆಗಾಗ ಮೊಟಕ್ತಾ ಇದ್ರೂ
ತನ್ನ ಬಾಲ ಬಿಚ್ಚೋದು ಬಿಡಲ್ಲ
ಹಾವೂ ಸಾಯೋಲ್ಲ
ಕೋಲೂ ಮುರಿಯೋಲ್ಲ
ಬರೀ ಧ್ಯೇಯಗಳದ್ದೆ ಕಾರುಭಾರು
ಐನಾತಿ ಮನಸಿಗೆ
ಸ್ವಾರ್ಥದೊಳಗೊಂದು ಸ್ವಾರ್ಥ
ತಾನು ತನ್ನದೆಂಬ ಪ್ರತೀ ಮನುಷ್ಯನ
ಬೆಂಬಿಡದ ಭೂತ.
ಆಂತರ್ಯದಲಿ ಅವಿತಿರುವ
ನಿಶ್ಕಲ್ಮಷ ಸತ್ಯವೊಂದಿದೆ
ನಿನಗಾದರೂ ಅರಿವಾಗುವುದೆಂಬ ಗಾಢವಾದ ನಂಬಿಕೆ ನನಗಿದೆ
ಗುಟುಕುಧಾರಿಯ ನಟ್ಟಿರುಳು
ಗಾಂಧಾರಿಗೆ ಹಗಲೆಲ್ಲ ರಾತ್ರಿ
ಅದಾಗಿ ಬಂದೊದಗಿದ ಸಿರಿ
ಅದುಮಿ ಹಿಡಿದಿದೆ ಜೀವ
ಒಳಗೊಳಗೆ ಮಮ್ಮಲ ಮರುಗಿ.
ಕಟೆದ ದೇಹಕೆ ಬೇಕೇಕೆ
ಅಪರಿಮಿತ ಅನುದಿನದ ವಾತ್ಸಲ್ಯ
ದಿಕ್ಕೆಟ್ಟ ಭೂದಿಯಲಿ ಹೊರಳಾಡಲಿ...
-ಅರೆಯೂರು ಚಿ.ಸುರೇಶ್