ಕವಿ, ಪತ್ರಕರ್ತರು, ಲೇಖಕರು, ಅಂಕಣಕಾರರು

ಭಾನುವಾರ, ಡಿಸೆಂಬರ್ 2, 2018

25-11-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕವನ


ಸ್ವತಂತ್ರ ನಾರಿ

ಭವ್ಯ ಭಾರತದ ನಾರಿ
ಕಿತ್ತೆಸೆ ನಿನ್ನ ಬಂಧನದ ಸ್ಯಾರಿ
ಮಾನ ಮರ್ಯಾದೆಯನ್ನು ಫ್ಯಾಷನಿಗೆ ಮಾರಿ
ಹೇಳು ನೀ ಎಲ್ಲರಿಗೂ ಸಾರಿ ಸಾರಿ
ನಾನು ಸ್ವತಂತ್ರ ನಾರಿ

ಅಪ್ಪನ ಮಮತೆ, ಅಣ್ಣನ ಅಕ್ಕರೆ
ನಿನಗನ್ನಿಸುತ್ತೆ ಬಂಗಾರದ ಪಂಜರವೆಂದು
ಹಾತೋರೆಯುತ್ತೆ ಮನಸ್ಸು
ಸ್ವತಂತ್ರ ಹಕ್ಕಿಯಾಗಿ ಹಾರಾಡಲು

ಬೇಡ ನಿನಗೆ ಗಂಡಸಿನ 
ಆಶ್ರಯದ ಬಂಧನ
ಬಿಡುಗಡೆ ಪಡೆದು
ನೀ ಹೋಗುವುದಾದರೂ ಎಲ್ಲಿ?

ನೆನಪಿರಲಿ ಹೆಣ್ಣೇ
ನೀ ಎಷ್ಟೇ ಸ್ವತಂತ್ರಳಾದರೂ
ಅಪ್ಪನ ಅಕ್ಕರೆಗೆ
ಪ್ರಿಯತಮನ ಅಪ್ಪುಗೆಗೆ
ಮಗನ ಅಮ್ಮಾ ಎಂಬ 
ಕೂಗಿಗೆ ನೀ ಬಂಧಿಯೇ...




-ಅರೆಯೂರು ಚಿ.ಸುರೇಶ್
ಗೂಳೂರು