BREKING NEWS

ಭಾನುವಾರ, ಡಿಸೆಂಬರ್ 2, 2018

11-11-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕವನ














ದೀಪವ ಹಚ್ಚಿರಿ...



ಮನದ ಮೂಲೆಯ
ಕಡೆಯ ಕೊಳೆಯನೂ
ಕಳೆದು ಹಾಕುವ ಬನ್ನಿರಿ...
ಕನಸುಗಳ ರಂಗೋಲಿಯೆಳೆದು
ನಡುವೆ ದೀಪವ ಹಚ್ಚಿರಿ...

ಹೃದಯಾಕಾಶ ಬುಟ್ಟಿ ರಂಗಿನ ಲೋಕ 
ಧರೆಗಿಳಿದು ಬಂದಿದೆ ನಕ್ಷತ್ರ ಲೋಕ 
ಎಲ್ಲೆಡೆಗೆ ಹೊಮ್ಮಿದೆ ಬೆಳಕಿನ ಸೆಳಕು 
ಜಗದಲಿ ತುಂಬಿದೆ ಸಂತಸದ ಹೊನಲು 
ಮನೆ ಮನೆ ಊರು ಕೇರಿಗಳಲ್ಲಿ 
ಎಲ್ಲರ ಕಂಗಳಲಿ ಹೊಳೆಯಲಿ ಹಣತೆಯ ಕಾಂತಿ

ನರನೊಳಿಹ ಅಸುರನನ್ನು
ನಶಿಸಿ ಬೆಳಗುವ ಹಣತೆಯು
ಬೆಳಗಬೇಕಿದೆ...
ಎಲ್ಲ ಮನದೊಳು
ಹೊಸತು ಆಕಾಶಬುಟ್ಟಿಯು.

ಸತ್ಯವನು ಬೆಳಗುವ ದೀಪವನು ಹಚ್ಚುವ 
ಸುಳ್ಳು ಎನ್ನುವ ಅಂದಕಾರವ ಬಾಳಿಂದ ಓಡಿಸುವ 
ಹಚ್ಚುವ  ಪ್ರೀತಿಯ ದೀಪವ 

-ಅರೆಯೂರು ಚಿ.ಸುರೇಶ್ ತುಮಕೂರು