BREKING NEWS

ಮಂಗಳವಾರ, ಡಿಸೆಂಬರ್ 18, 2018

16-12-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಎರಡು ಕವನಗಳು


ಎಲ್ಲಿರುವೆ ನೀ ಚಲುವೆ...?


ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ, ಏನೋ ಕಳೆದು ಕೊಂಡಂತಿದೆ.

ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೂಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?

-ಅರೆಯೂರು ಚಿ.ಸುರೇಶ್
ತುಮಕೂರು



ವಿಪರ್ಯಾಸ
ನನ್ನ ಕಾವ್ಯಕ್ಕೆ ಸ್ಫೂರ್ತಿಯಾದ ಹುಡುಗಿ
ನನ್ನ ಬಾಳಿಗೆ ವರವಾಗಲಿಲ್ಲ,
ನನ್ನ ಹಾಡಿಗೆ ದನಿಗೂಡಿಸಿದ ಬೆಡಗಿ
ಕೈಗೆ ಸಿಗುವ ನಕ್ಷತ್ರವಾಗಲಿಲ್ಲ...
ಅವಳ ನಗುವಿನಲ್ಲೇ ಬರೆಸಿದಳು ನೂರಾರು ಕವಿತೆ
ಅವಳ ಪ್ರೀತಿಯ ನೋಟಕ್ಕೆ ಇದೆಯೇ ಸರಿಯಾದ ಅಳತೆ,
ಅವಳ ಮಾತಿನಲ್ಲಿದೆ ನೂರಾರು ಕವಿತೆ ಕವನಗಳ ಸಿಂಚನ
ಅರ್ಧ ಪಡೆಯಿತು ಇನ್ನರ್ಧ ಪಡೆಯಲು ಸೋತಿತು ಈ ಮನ...
ಜೀವನದಲ್ಲಿ ಏನೂ ಮಾಡಲಾಗದು ಎಂದು ಕುಳಿತವನಿಗೆ
ಕವಿ ಹೃದಯ ತುಂಬಿದಳು ಆದರೆ ಹೃದಯ ತುಂಬಲಿಲ್ಲ,
ಅವಳಾಗಿದ್ದಳು ಮೈಸೂರಿನ ಬಿಳಿಯ ಮಲ್ಲಿಗೆ
ಆದರೆ ಆ ಮಲ್ಲಿಗೆ ಒಲಿಯಲಿಲ್ಲ ಅರೆಯೂರಿನ ಈ ಕವಿಗೆ...


-ಅರೆಯೂರು ಶ್ರೀವೈದ್ಯಸುತ
ಅರೆಯೂರು ವೈದ್ಯನಾಥಪುರ