BREKING NEWS

ಗುರುವಾರ, ಸೆಪ್ಟೆಂಬರ್ 2, 2010

ಮಾನ್ಯ ಮುಖ್ಯಮಂತ್ರಿಗಳೇ ,

ಮಾನ್ಯ ಮುಖ್ಯಮಂತ್ರಿಗಳೇ ,
       ಕಳೆದ ತಿಂಗಳು ಸಾವಯವ ಕೃಷಿಕ ಮಾಕನಹಳ್ಳಿಯ ಸಿದ್ದಲಿಂಗಪ್ಪನ ಮನೆಗೆ ಭೇಟಿ ಕೊಟ್ಟಾಗ,ತಾವು ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ಕೊಡುವ ಕಾರ್ಯಕ್ರಮವಿತ್ತು. ತಾವು ನಮ್ಮೂರಿಗೆ ಬಾರದೆ ಹಾಗೆ ವಾಪಸು ಹೋಗಿ ಬಿಟ್ಟಿರಿ. ಕಾರಣ ನಮಗೆ ಗೊತ್ತಾಗಲಿಲ್ಲ. ಅದೇನೇ ಇರಲಿ ನೀವು ಮಾತ್ರ ನಮ್ಮೂರಿಗೆ ಬಾರದೆ ನಮಗಂತೂ ನಿರಾಸೆ ಮಾಡಿ ಬಿಟ್ಟಿರಿ.
        ಅಂದಹಾಗೆ ಈಗ ನಾನು ನಿಮ್ಮಲ್ಲಿ ಬಿನ್ನವಿಸಿ ಕೊಳ್ಳುವುದೇನೆಂದರೆ, ಅರೆಯೂರು ಮಜರೆ ವೈದ್ಯನಾಥಪುರದಲ್ಲಿ ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ.  ಇದ್ದಿದೊಂದು ಬೋರ್ ಕೊಟ್ಟು ಹೋಗಿದೆ. ಕರಂಟ್ ಬಾರದ ದಿನ ನೀರಿಲ್ಲದಂತಾಗಿದೆ. ನೀವೇ ಮನಗಾಣಬೇಕು ನಿಮ್ಮ ಘನ ಸರ್ಕಾರ ಹಳ್ಳಿಗಳಿಗೆ ಕರಂಟ್ ಯಾವರೀತಿ ನಿಡುತಿದ್ದಿರಿ ಎಂಬುವುದ್ದನ್ನು.
ದಯಮಾಡಿ ನಮಗೆ ಕುಡಿಯುವ ನೀರನ್ನು ನೀಡಿ
                                                       ಅರೆಯೂರು ಚಿ.ಸುರೇಶ್
                                                         9620656604

2010/9/7, B S Yeddyurappa <https://mail.google.com/mail/h/542xipuc5gqn/?v=b&cs=wh&to=info@yeddyurappa.in>:
 

Thanks for the mail, your mail has been sent to DC for necessary action..