BREKING NEWS

ಭಾನುವಾರ, ಡಿಸೆಂಬರ್ 2, 2018

18-11-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕವನ

ಮನಸ್ಸು


ಮನಸ್ಸಿನ ಗೂಡೊಳು
ಅವಿತ ಪಂಚರಂಗಿ ಬಣ್ಣ
ಬೇಡ ಬೇಡಾ ಅಂದರೂ
ತನ್ನಿಶ್ಚೆಯಂತೆ ಜಾಲಾಡಿ
ನಡೆಯಲು ಹಾತೊರೆಯುತ್ತಿರುವಾಗ
ಬಯಕೆಗಳ ಮೂಟೆ ಹೊತ್ತ ಮನುಷ್ಯ
ಕಡ್ಡಿ ತುಂಡು ಮಾಡಿದಂತೆ
ಆಗಾಗ ಮೊಟಕ್ತಾ ಇದ್ರೂ
ತನ್ನ ಬಾಲ ಬಿಚ್ಚೋದು ಬಿಡಲ್ಲ
ಹಾವೂ ಸಾಯೋಲ್ಲ
ಕೋಲೂ ಮುರಿಯೋಲ್ಲ
ಬರೀ ಧ್ಯೇಯಗಳದ್ದೆ ಕಾರುಭಾರು
ಐನಾತಿ ಮನಸಿಗೆ
ಸ್ವಾರ್ಥದೊಳಗೊಂದು ಸ್ವಾರ್ಥ
ತಾನು ತನ್ನದೆಂಬ ಪ್ರತೀ ಮನುಷ್ಯನ
ಬೆಂಬಿಡದ ಭೂತ.
ಆಂತರ್ಯದಲಿ ಅವಿತಿರುವ
ನಿಶ್ಕಲ್ಮಷ ಸತ್ಯವೊಂದಿದೆ
ನಿನಗಾದರೂ ಅರಿವಾಗುವುದೆಂಬ ಗಾಢವಾದ ನಂಬಿಕೆ ನನಗಿದೆ
ಗುಟುಕುಧಾರಿಯ ನಟ್ಟಿರುಳು
ಗಾಂಧಾರಿಗೆ ಹಗಲೆಲ್ಲ ರಾತ್ರಿ
ಅದಾಗಿ ಬಂದೊದಗಿದ ಸಿರಿ
ಅದುಮಿ ಹಿಡಿದಿದೆ ಜೀವ
ಒಳಗೊಳಗೆ ಮಮ್ಮಲ ಮರುಗಿ.
ಕಟೆದ ದೇಹಕೆ ಬೇಕೇಕೆ
ಅಪರಿಮಿತ ಅನುದಿನದ ವಾತ್ಸಲ್ಯ
ದಿಕ್ಕೆಟ್ಟ ಭೂದಿಯಲಿ ಹೊರಳಾಡಲಿ...


-ಅರೆಯೂರು ಚಿ.ಸುರೇಶ್

 ತುಮಕೂರು


11-11-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕವನ














ದೀಪವ ಹಚ್ಚಿರಿ...



ಮನದ ಮೂಲೆಯ
ಕಡೆಯ ಕೊಳೆಯನೂ
ಕಳೆದು ಹಾಕುವ ಬನ್ನಿರಿ...
ಕನಸುಗಳ ರಂಗೋಲಿಯೆಳೆದು
ನಡುವೆ ದೀಪವ ಹಚ್ಚಿರಿ...

ಹೃದಯಾಕಾಶ ಬುಟ್ಟಿ ರಂಗಿನ ಲೋಕ 
ಧರೆಗಿಳಿದು ಬಂದಿದೆ ನಕ್ಷತ್ರ ಲೋಕ 
ಎಲ್ಲೆಡೆಗೆ ಹೊಮ್ಮಿದೆ ಬೆಳಕಿನ ಸೆಳಕು 
ಜಗದಲಿ ತುಂಬಿದೆ ಸಂತಸದ ಹೊನಲು 
ಮನೆ ಮನೆ ಊರು ಕೇರಿಗಳಲ್ಲಿ 
ಎಲ್ಲರ ಕಂಗಳಲಿ ಹೊಳೆಯಲಿ ಹಣತೆಯ ಕಾಂತಿ

ನರನೊಳಿಹ ಅಸುರನನ್ನು
ನಶಿಸಿ ಬೆಳಗುವ ಹಣತೆಯು
ಬೆಳಗಬೇಕಿದೆ...
ಎಲ್ಲ ಮನದೊಳು
ಹೊಸತು ಆಕಾಶಬುಟ್ಟಿಯು.

ಸತ್ಯವನು ಬೆಳಗುವ ದೀಪವನು ಹಚ್ಚುವ 
ಸುಳ್ಳು ಎನ್ನುವ ಅಂದಕಾರವ ಬಾಳಿಂದ ಓಡಿಸುವ 
ಹಚ್ಚುವ  ಪ್ರೀತಿಯ ದೀಪವ 

-ಅರೆಯೂರು ಚಿ.ಸುರೇಶ್ ತುಮಕೂರು


4-11-2018ರ "ಪ್ರಜಾಪ್ರಗತಿ" ದಿನ ಪತ್ರಿಕೆಯ ಪ್ರಗತಿ ಪುರವಣಿಯಲ್ಲಿ ನನ್ನ ಕಥೆ