BREKING NEWS

ಮಂಗಳವಾರ, ಮೇ 29, 2018

ನಾನಿಟ್ಟ ರಂಗೋಲಿ



ಮನೆಯಂಗಳದಲ್ಲಿ
ನಾನಿಟ್ಟ ಚುಕ್ಕಿ ಸಾಲು
ಒಂದಲ್ಲ ಎರಡಲ್ಲ
ಹತ್ತಾರು ಸಾಲು ಸಾಲು
ಚುಕ್ಕಿ ಚುಕ್ಕಿಗೂ
ಅದೇನೋ ನಂಟು
ಸಾಲು ಸಾಲು ಸೇರುತ
ಮೂಡಿತಲ್ಲಿ ಹೂದಂಟು
ಮತ್ತಹಲವು ರೇಖೆಗಳು
ನೃತ್ಯ ಮಾಡುತ ನಗಲು
ಅಲ್ಲಲ್ಲಿ ಖಾಲಿ ಚುಕ್ಕಿಗಳು
ಒಂಟಿತನದ ಚಿಂತೆ ಕಾಡಲು
ಅರಳಿತು ಹೂವೊಂದು
ಮುದ್ದಾದ ರೂಪದೊಳು
ಹೇಳಿತು ಕಥೆಯೊಂದ
ಚುಕ್ಕಿಯ ಸಾಲುಗಳು
ಭಾವನೆಗಳ ಬಿಂಬಿಸುವ
ಬಣ್ಣಗಳ ಶೃಂಗಾರವು
ರಂಗೋಲಿ ಚಿತ್ತಾರ ನೀಡುವ
ಮೆನೆಯಂಗಳದ ಚೆಲುವು
ನಾನಿಟ್ಟ  ರಂಗೋಲಿ...


-ಅರೆಯೂರು ಚಿ.ಸುರೇಶ್, ತುಮಕೂರು

ಎಲ್ಲಿರುವೆ ನೀ ಚಲುವೆ...?

<marquee> ಕವನ:ಎಲ್ಲಿರುವೆ ನೀ ಚಲುವೆ...? </marquee>



ಎಲ್ಲಿರುವೆ ನೀ ಚಲುವೆ
ನಿನ್ನ ಹುಡುಕುವ ಭರದಲ್ಲಿ
ಯುಗಗಳು ಕ್ಷಣಗಳಂತೆ ಉರುಳುತ್ತಿವೆ
ಸಾರ್ಥಕವಾಗುತ್ತಿಲ್ಲ ನನ್ನ ಈ ಜನುಮಕ್ಕೆ
ಎಲ್ಲೋ, ಏನೋ ಕಳೆದು ಕೊಂಡಂತಿದೆ.

ಕಣ್ಣಿಗೆ ನಿದ್ರೆ ಬರುತ್ತಿಲ್ಲ,
ಹಸಿವಿನ ಚಿಂತೆ ನನಗಿಲ್ಲ,
ನಿನ್ನ ಹುಡುಕುವ ತವಕ ಬಿಟ್ಟರೆ
ಜೀವನದ ಗುರಿ ಬೇರೊಂದಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ನಿನ್ನ ಹುಡುಕದ ತಾಣಗಳಿಲ್ಲ
ಸಿಗುವುದಾದರು ಎಲ್ಲಿ ಎಂದು ಸುಳಿವೂ ಸಿಗುತ್ತಿಲ್ಲ
ಅಲೆದಲೆದು ಬಂದಿಹೆನು ಹಿಡೀ ಪ್ರಪಂಚವನ್ನ
ನಿನ್ನ ನೆರಳು ಕೂಡ ಹುಡುಕಲಾಗಲಿಲ್ಲ
ಹೇಳು ಚಲುವೆ ನೀ ಎಲ್ಲಿರುವೆ..?

ಹಿಡೀ ಪ್ರಪಂಚದಲ್ಲಿ
ನಿನ್ನ ಪ್ರೀತಿಸಲೆಂದೇ ಹುಟ್ಟಿದ ಭೂಪ ನಾನು
ನೆನೆಯುತಿಹೆನು ನಿನ್ನನ್ನೇ ನನ್ನೀ ಮನದಲ್ಲಿ
ಸುಖಾ ಸುಮ್ಮನೆ ಕಣ್ಮರೆಯಾಗಿ ಯಾಕಿರುವೆ
ಹೇಳು ಚಲುವೆ ನೀ ಎಲ್ಲಿರುವೆ..?

-ಅರೆಯೂರು ಚಿ.ಸುರೇಶ್, ತುಮಕೂರು

ಭಾನುವಾರ, ಫೆಬ್ರವರಿ 16, 2014

ಗೆಲುವೆಂಬ ಅಂತ್ಯವಿಲ್ಲದ ಪಯಣಕ್ಕೆ ಏನೇನು ಬೇಕು?

’ಗೆಲುವು’ ಎಂಬ ಮೂರಕ್ಷರದ ಸಂಗತಿಗೆ ಸಂಬಂಧಿಸಿದಂತೆ ಅನೇಕ ದಶಕಗಳಿಂದ ರಿಸರ್ಚು ನಡೆಯುತ್ತಲೇ ಇದೆ. ಗೆಲುವೆಂಬುದು ಆಕಸ್ಮಿಕವಾ? ಖಂಡಿತ ಅಲ್ಲ. ಅವಿವೇಕಿಗಳು ಮಾತ್ರ ಬದುಕಿನಲ್ಲಿ ಆಕಸ್ಮಿಕದಂತಹುದೇನಾದರೂ ಘಟಿಸಲಿ ಎಂದು ಕಾಯುತ್ತ ಕೂಡುತ್ತಾರೆ. ತುಂಬ ಸುಂದರವಾದ ತೋಟವೊಂದರಿಂದ ಹೊರಬರುತ್ತಿದ್ದ ಅದರ ಒಡೆಯನನ್ನು ನಿಲ್ಲಿಸಿ ಪಾದ್ರಿ ಹೇಳಿದನಂತೆ, ’ದೇವರು ತುಂಬ ಹೃದಯವಂತ. ನಿನಗೆ ಅದ್ಬುತವಾದ ತೋಟ ಕೊಟ್ಟಿದ್ದಾನೆ. ಆತನಿಗೆ ನೀನು ಋಣಿಯಾಗಿರಬೇಕು.’ ಕೂಡಲೇ ತೋಟದ ಒಡೆಯ ವಿನೀತವಾದ ದನಿಯಲ್ಲಿ ಹೇಳಿದನಂತೆ: ’ನಿಜ, ದೇವರು ಹೃದಯವಂತ. ನನಗೆ ತೋಟ ಕೊಟ್ಟ. ಆದರೆ ಕೊಡುವ ಮುನ್ನ ಆತನ ಹತ್ತಿರವೇ ಇತ್ತಲ್ಲ ತೋಟ? ಆಗ ನೋಡಬೇಕಿತ್ತು ನೀವು ಆ ತೋಟವನ್ನ!’ ಮನುಷ್ಯನ ವಿಶ್ವಾಸವೆಂದರೆ ಅದು.