ಸೋಮವಾರ, ಸೆಪ್ಟೆಂಬರ್ 27, 2010

ಭಾರತದಲ್ಲೇ ನಂಬರ್ 1 ನ್ಯೂಸ್ ಚಾನೆಲ್

tv9 ಕನ್ನಡ ಉತ್ತಮ ಸಮಾಜಕ್ಕಾಗಿ.
ಈಗ  ಭಾರತದಲ್ಲೇ ನಂಬರ್ 1 ನ್ಯೂಸ್ ಚಾನೆಲ್ (ಹಿಂದಿ ಚಾನಲ್ "ಅಜ್ ತಕ್" ಹಿಂದಿಕ್ಕಿದ ಟಿವಿ ೯ ಕರ್ನಾಟಕ )
ಇದು ಅತಿಶಯೋಕ್ತಿಯ ಮಾತಲ್ಲ. ಬಜ್ಪೆ ವಿಮಾನ ದುರಂತದಲ್ಲಿ ಭಾರತದ ಬಹುತೇಕ ಎಲ್ಲ ಸುದ್ದಿ ಚಾನೆಲ್ ನವರು  tv9 ಕನ್ನಡವನ್ನೇ ಅವಲಂಬಿಸಿದ್ದು ಸುಳ್ಳಲ್ಲ.
ಚಕ್ರವ್ಯೂಹ, ನೀವು ಹೇಳಿದ್ದು.. ನಾವು ಕೇಳಿದ್ದು..., ಹೀಗೂ...ಉಂಟೆ? ವಾರೆಂಟ್... ಹಾಗು, ವಿಶೇಷ ಕಾರ್ಯಕ್ರಮಗಳು ಎಂದರೆ ನನಗಿಷ್ಟ.


-ಅರೆಯೂರು ಚಿ.ಸುರೇಶ್
ವೈದ್ಯನಾಥಪುರ-೫೭೨೧೧೮
ಅರೆಯೂರು ಅಂಚೆ
ತುಮಕೂರು ತಾ.,ಜಿಲ್ಲೆ.
areyurusuresh@gmail.com

http://www.areyurusuresh.blogspot.com/
http://www.areyurusuresh.page.tl/
areyurupatrike.blogspot.com

ಭಾನುವಾರ, ಸೆಪ್ಟೆಂಬರ್ 19, 2010

ಮಾನ್ಯ ಜಿಲ್ಲಾಧಿಕಾರಿಗಳಿಗೆ,

ಮಾನ್ಯ ಜಿಲ್ಲಾಧಿಕಾರಿಗಳಿಗೆ,
             ಸ್ವಾಮಿ,     "ನೀರಿಗೆ ಹಾಹಾಕಾರ" ಈ ಶೀರ್ಷಿಕೆಯಲ್ಲಿ ಮುಖ್ಯಮಂತ್ರಿಗಳಿಗೆ ೧ ಇ-ಮೇಲ್ ಮಾಡಿದ್ದೆ. ಅದು ನಿಮ್ಮ ಗಮನಕ್ಕೂ ಬಂದಿರಬಹುದು ಎಂದುಕೊಂಡಿದ್ದೇನೆ ಆದರೂ ಕೂಡ ನಮ್ಮೂರಿನ ಕುಡಿಯುವ ನೀರಿಗೆ ಯಾವುದೇ ಪರ್ಯಾಯ ವ್ಯವಸ್ತೆ ಆಗಿಲ್ಲ.ಅರೆಯೂರು ಮಜರೆ ವೈದ್ಯನಾಥಪುರದ ಜನರ ಗೋಳು ನಿಮ್ಮಿಂದಲೂ ಪರಿಹಾರ ಕನದ್ದಿದ್ದರೆ ಮತ್ತಾರಿಂದ ಅದು ಸಾದ್ಯ?
                  ಅರೆಯೂರು ಗ್ರಾಮ ಪಂಚಾಯ್ತಿ ಒಂದು ಅವ್ಯವಹಾರದ ಆಗರ. ಅಲ್ಲಿರುವ ಕಾರ್ಯದರ್ಶಿ,ಬಿಲ್ ಕಲೆಕ್ಟರ್, ಜವಾನನಿಂದ ಹಿಡಿದು ಎಲ್ಲರು ಲಂಚಕೊರರೆ...
                ಕಾರ್ಯದರ್ಶಿ ಅದವಾಗ ಆಫೀಸ್ ಗೆ ಬರ್ತಾನೋ, ಹೋಗ್ತಾನೋ ಆ ದೇವರಿಗೆ ಗೊತ್ತು. ಬಡ ಬಗ್ಗರಿಗೆ ಸರ್ಕಾರ ಮನೆ ನೀಡಿದರೆ ಅದರ ಬಿಲ್ಲಿನ ಚೆಕ್ ನೀಡಲು ಇವರು ಲಂಚ ಕೇಳುತಾರೆ. ಅದು ಸಾವಿರ ಗಟ್ಟಲೆ.
ಇದನ್ನೆಲ್ಲಾ ನೀವು ಗಮನಕ್ಕೆ ಹಾಕಿ ಕೊಂಡು ಕ್ರಮ ಕೈ ಗೊಳ್ಳ ಬೇಕೆಂದು ಕೇಳಿ ಕೊಳ್ಳುತ್ತೇನೆ.
                                                                         ತಮ್ಮ ವಿಧೇಯ
                                                                          ಅರೆಯೂರು ಚಿ.ಸುರೇಶ್
                                                                      ನನ್ನ ಮೊಬೈಲ್ :96206567604

ಗುರುವಾರ, ಸೆಪ್ಟೆಂಬರ್ 2, 2010

ಮಾನ್ಯ ಮುಖ್ಯಮಂತ್ರಿಗಳೇ ,

ಮಾನ್ಯ ಮುಖ್ಯಮಂತ್ರಿಗಳೇ ,
       ಕಳೆದ ತಿಂಗಳು ಸಾವಯವ ಕೃಷಿಕ ಮಾಕನಹಳ್ಳಿಯ ಸಿದ್ದಲಿಂಗಪ್ಪನ ಮನೆಗೆ ಭೇಟಿ ಕೊಟ್ಟಾಗ,ತಾವು ಅರೆಯೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಭೇಟಿ ಕೊಡುವ ಕಾರ್ಯಕ್ರಮವಿತ್ತು. ತಾವು ನಮ್ಮೂರಿಗೆ ಬಾರದೆ ಹಾಗೆ ವಾಪಸು ಹೋಗಿ ಬಿಟ್ಟಿರಿ. ಕಾರಣ ನಮಗೆ ಗೊತ್ತಾಗಲಿಲ್ಲ. ಅದೇನೇ ಇರಲಿ ನೀವು ಮಾತ್ರ ನಮ್ಮೂರಿಗೆ ಬಾರದೆ ನಮಗಂತೂ ನಿರಾಸೆ ಮಾಡಿ ಬಿಟ್ಟಿರಿ.
        ಅಂದಹಾಗೆ ಈಗ ನಾನು ನಿಮ್ಮಲ್ಲಿ ಬಿನ್ನವಿಸಿ ಕೊಳ್ಳುವುದೇನೆಂದರೆ, ಅರೆಯೂರು ಮಜರೆ ವೈದ್ಯನಾಥಪುರದಲ್ಲಿ ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ.  ಇದ್ದಿದೊಂದು ಬೋರ್ ಕೊಟ್ಟು ಹೋಗಿದೆ. ಕರಂಟ್ ಬಾರದ ದಿನ ನೀರಿಲ್ಲದಂತಾಗಿದೆ. ನೀವೇ ಮನಗಾಣಬೇಕು ನಿಮ್ಮ ಘನ ಸರ್ಕಾರ ಹಳ್ಳಿಗಳಿಗೆ ಕರಂಟ್ ಯಾವರೀತಿ ನಿಡುತಿದ್ದಿರಿ ಎಂಬುವುದ್ದನ್ನು.
ದಯಮಾಡಿ ನಮಗೆ ಕುಡಿಯುವ ನೀರನ್ನು ನೀಡಿ
                                                       ಅರೆಯೂರು ಚಿ.ಸುರೇಶ್
                                                         9620656604

2010/9/7, B S Yeddyurappa <https://mail.google.com/mail/h/542xipuc5gqn/?v=b&cs=wh&to=info@yeddyurappa.in>:
 

Thanks for the mail, your mail has been sent to DC for necessary action..