BREKING NEWS

ಶುಕ್ರವಾರ, ಜನವರಿ 24, 2014

ಕವಿತೆ:ಸಂಕ್ರಾಂತಿ

ಹೊಸ ವರುಷ ಬಂತು
ಹೊಸ ಹುರುಪು ತಂತು
ಸಂಕ್ರಾಂತಿ ಬಂತು
ಸಂತೋಷ ತಂತು
ನೇಸರನು ಪಥವ ಬದಲಿಸುತ್ತಿರಲು
ಮಾವು ಹೂ ಬಿಟ್ಟು ಸ್ವಾಗತಿಸುತ್ತಿದೆ
ತನುಮನದಲ್ಲಿ ಹೊಸ ಚೈತನ್ಯ ಮೂಡುತ್ತಿದೆ
ಹೊಸ ಬೆಳೆ ಹೊಸ ಕಾಂತಿ
ಜಗದಲಿ ಹರಡುತಿದೆ
                                           -ಅರೆಯೂರು ಚಿ.ಸುರೇಶ್


 ದಿನಾಂಕ:15/01/2014ರಂದು ರೇಡಿಯೋ ಸಿದ್ದಾರ್ಥ (90.8 FM0 ದಲ್ಲಿ ಪ್ರಸಾರವಾದ ಕವಿತೆ.